ಇಂತಹ ಅದ್ಭುತ ಕನ್ನಡಕ್ಕಾಗಿ ಮಿಡಿವ ಸಹೃದಯ ಕವಿ, ಹೋರಾಟಗಾರ, ನಾಟಕಕಾರ, ಪತ್ರಿಕಾ ಸಂಪಾದಕರಾಗಿದ್ದ ಚಂಪಾರವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಅಂದರೆ ೧೦-೦೧-೨೦೨೨ ರ ಸೋಮವಾರ ಬೆಳಗ್ಗೆ ನಮ್ಮನ್ನು ಅಗಲಿದ್ದಾರೆ. ಇಂತಹ ಕವಿ ಮಹಾಶಯರು ಮತ್ತೆ ಮತ್ತೆ ನಾಡಿನಲ್ಲಿ ಜನ್ಮತಾಳಿ ಬರಲಿ ಎಂದು ಪ್ರಾರ್ಥಿಸಿ ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ